ಸಣ್ಣಬಾಲಕನಿವನೋ ಕಾಸೀಮನೋ

ಸಣ್ಣಬಾಲಕನಿವನೋ ಕಾಸೀಮನೋ
ಸಣ್ಣಬಾಲಕನಿವನೋ || ಪ ||

ಮೌನದಲಿ ಮಹಾಮಂತ್ರ ಜಪಿಸಿ
ಜ್ಞಾನ ಪೈಗಂಬರರು ಇವರು
ತಾನೇ ಆರುದಿನ ಶಾರದಿ
ಧೀನ ಧೀನೆಂದೆನುತ ಕುಣಿಯುವ || ೦ ||

ಧಾಮಶಪುರದ ಕ್ವಾಟಿ ಬಾಗಿಲು ಮುರಿದು
ಪ್ಯಾಟಿ ಲೂಟಿಮಾಡಿ ಈ ಕ್ಷಣ
ದಾಟಿ ಬರುವ ಸಮಯದೊಳು
ದಿಟ್ಟ ಯಜೀದ ಸಿಟ್ಟಿನಿಂದಲಿ
ಮುಟ್ಟ ಬಾಣವ ಬೀರಿದಾ || ೨ ||

ಆರಣ್ಯದಲಿ ಬೀಬಿಘಾತೀಮ ಹುಡುಕುತಲಿ
ಸ್ವರಗಿದೀಪರಿ ಮರಗಿ ಆಲ್ವರಿ
ಕೊರಗಿ ಕಣ್ಣೀರ ಸುರಿಸುತಲಿ
ಎಂಥಾ ವ್ಯಾಳ್ಯವ ತಂದ್ಯೋ ಶಿವನೇ ನಾ
ಎಲ್ಲಿ ಹುಡುಕುತ ಹೋಗಲಿ || ೩ ||

ಮುತ್ತಿನ್ಹಾರವು ಯಾತಕ್ಕೆ ಯಾರಿಗೆ ಬೇಕೋ
ಮುತ್ತಿನ್ಹಾರವು ಯಾತಕ್ಕೆ
ಆತುರದಿ ಕರಿಮಣಿ ಹರಿದು
ಜಾತುರದಿ ಚಲ್ವರಿದು ಚಲ್ಲಿ
ಧಾತ ಶಿಶುನಾಳಧೀಶನಲ್ಲಿ
ಪ್ರೀತಿ ಇಟ್ಟುಕೊಂಡು ನೀ ಬಾ || ೪ ||

*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏನಾತೋ ರಣಘಾತ ಕಾತೂನ ಸುತರ
Next post ಯಾ ಇಮಾಮ ಕಾಸೀಮ ಧೂಲಾ

ಸಣ್ಣ ಕತೆ

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

cheap jordans|wholesale air max|wholesale jordans|wholesale jewelry|wholesale jerseys